ಕರ್ಣಬಂದು ಕರ್ಬಲದಲಿ ಪಾರ್ಥಾ

ಕರ್ಣಬಂದು ಕರ್ಬಲದಲಿ ಪಾರ್ಥಾ
ವರ್ನಕಂಡು ಕದನಕ ನಿಂತ ಸು-       ||ಪ||
ವರ್ಣಪೀಠ ಮದೀನ ಶಾರದಿ
ಪರ್ವ ಅಶ್ವನೇರಿದನೆಂತು             ||ಅ.ಪ.||

ಭಾಪುರೆ ಅರ್ಜುನ ತಪ್ಪಿಸಿ ಹರಿತ
ವರ್ನ ಕೋಪ ತಿಳಿ ಕುರುಕ್ಷೇತ್ರದಲಿ
ಭಾಪುರೆ ನಿನ್ನನು ಹುಡಕುತ ಬಂದೆನು
ಛೇತಕಿ ಪಾತಕಿ ಕ್ಷತ್ರಿಯರಲ್ಲಿ            ||೧||

ಹಸೇನಿ ಹುಸೇನಿ ಎರಡರ ಮಧ್ಯದಿ
ಬಂದು ಸಿಕ್ಕಿಯೋ ಸಮರದಲಿ
ಸಮ್ಮುಖದಿ ಕೇಶವನ ಸಹಾಯಕೆ
ಬಂದನು ಏಕಕಾಲದಲ್ಲಿ                || ೨ ||

ಹ್ಯಾಂಗ ಮರಣ ತರಬೇಕೆನುತಲಿ ಹರಿ
ಬ್ಯಾಗ ಬ್ರಾಹ್ಮಣನ ರೂಪಾಗಿ
ಆಗ ಬಾಕಿಲಿಂದ ಬಗಿದು ಚಲ್ಲಿದನು
ಆರ್ಜುನ ಶರದಿ                     || ೩ ||

ವಸುಧಿಯೊಳಗ ಹೊಸದಾದ ರಿವಾಯತ
ಕರ್ಣಪರ್ವ ಐಸುರದಿ
ರಸಿಕರೆಲ್ಲರು ಕರ್ಬಲದಾಟಕ
ದಶದಿನ ಹಾಡಿರಿ ಸಂತೋಷದಿ
ಉಸುರಿದ ಮೊಹರಮ್ಮ ಹಬ್ಬದೊಳಗೆ
ಶಿಶುನಾಳಧೀಶನ ಹೆಸರುಗೊಂಡು ಪೇಳರಿ ಮುದದಿ ||೪|

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಬರು ನಿನ್ನ ಮರೆತೇಬಿಟ್ರಲ್ಲೋ ಕನಕ…!
Next post ನಗೆ ಡಂಗುರ – ೫೮

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys